Karnataka State Labour Council

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು

ನಮ್ಮ ಬಗ್ಗೆ

ಇದರ ಮಹತ್ವ

ಕಾರ್ಮಿಕ ಪರಿಷತ್

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಇದು ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತು ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದು ಮತ್ತು ಕರ್ನಾಟಕ ರಾಜ್ಯ ಕಾರ್ಮಿಕ ಒಕ್ಕೂಟದ ಅಂಗ ಸಂಸ್ಥೆಯಾಗಿದ್ದು, ಕಾರ್ಮಿಕರ ಹಿತ ಕಾಯುವಲ್ಲಿ ಮತ್ತು ಕನ್ನಡ ನಾಡಿನ ಕಸ್ತೂರಿ ಕನ್ನಡವನ್ನು ಬೆಳೆಸುವಲ್ಲಿ ಮತ್ತು ಉಳಿಸುವಲ್ಲಿ ಹಾಗೂ ಮಹಿಳೆ ಮತ್ತು ಮಕ್ಕಳ ಹಕ್ಕು ಗ್ರಾಹಕರ ಹಕ್ಕು ಹಾಗೂ ಸಾರ್ವಜನಿಕ ಸೌಲಭ್ಯಗಳ ಬಗ್ಗೆ ನೊಂದವರು, ಶೋಷಿತರು, ದಲಿತರು, ರೈತರು, ಕಲಾವಿದರು, ಮತ್ತು ಸಾಂಸ್ಕೃತಿಕ, ಧಾರ್ಮಿಕ, ಆರೋಗ್ಯ ಮತ್ತು ಶೈಕ್ಷಣಿಕ, ಕ್ರೀಡಾ ಹಕ್ಕುಗಳನ್ನು ಪಡೆಯುವಲ್ಲಿ ಸರ್ಕಾರ ಮತ್ತು ನೋಂದವರ ಜೊತೆ ಸಮನ್ವಯತೆ ಸಾಧಿಸಿ ನಾಡಿನ ಸ್ವಸ್ಥ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕಾನೂನು ಬದ್ಧ ಹೋರಾಟಗಳಿಗೆ ಹಾಗೂ ಸಾಮಾಜಿಕ ಕಳಕಳಿ ಹೊಂದಿದ ಕಾರ್ಯಕ್ರಮಗಳು ಹಾಗೂ ಮೊಹೊನ್ನತ ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ಸಂಸ್ಥೆಯೊ ಸರ್ವ ಸ್ವತಂತ್ರವಾಗಿದ್ದು ಜಾತಿ ಧರ್ಮ ವರ್ಣಗಳ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡು ಸರ್ವರನ್ನು ಸಮಾನತೆಯಿಂದ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸಂಸ್ಥೆಯ ರಾಜ್ಯಾಧ್ಯಕ್ಷರನ್ನು ಒಳಗೊಂಡಂತೆ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಸೈನಿಕರಂತೆ ಕರ್ತವ್ಯ ನಿರ್ವಹಿಸುತ್ತೇವೆ ಎನ್ನುವ ದೃಢಸಂಕಲ್ಪ ಕಾರ್ಮಿಕ ಪರಿಷತ್ತಿನ ದ್ಯಯೆ
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು

ಕರಾವಳಿ ಕನ್ನಡಿಗ

ಡಾ.ರವಿ ಶೆಟ್ಟಿ ಬೈಂದೂರು

ರಾಜ್ಯಾಧ್ಯಕ್ಷರು ,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು
ಡಾ. ರವಿ ಶೆಟ್ಟ ಬೈಂದೂರು. ಇವರು ಹುಟ್ಟಿದ್ದು ಕುಂದಾಪುವ ಹಾಲಾಡಿ ಹತ್ತಿರ ತ್ತಿರದ ಹಳ್ಳಿಯ ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ, ಹಳ್ಳಿಯಲ್ಲಿ ಹಾಗೂ ಬೆಳೆದಿನ ಕಷ್ಟದ ಜೀವನ ಕಂಡ ಇವರು ಸಾಹಿತಿ ಮತ್ತು ಲೇಖಕರು ಕೂಡ ಹೌದು, ಅವರು ಬರೆದ ಲೇಖನ “ವೇರೆ ರೇಷ್ಮೆಯರಿಗೂ ಮನಸ್ಸಿದೆ”, ತುಂಬಾ ಪ್ರಖ್ಯಾತಿ ಹೊಂದಿದ ಲೇಖನ ಇದಲ್ಲದೆ “ಕತ್ತಲೆ ಜಗತ್ತಿನ ಕರಾಳಮುಖ ಇದುವೇ ಮೆಜೆಸ್ಟಿಕ್”, ಮೆಜೆಸ್ಟಿಕ್ಕಿನ ಸುತ್ತಮುತ್ತ ನಡೆಯುವ ನೈಜ ಘಟನೆಗಳ ವಿವರ ಈ ಲೇಖನ ಪ್ರಸಿದ್ದಿ ಹೊಂದಿದೆ. ಜೊತೆಗೆ ಯುವಪೀಳಿಗೆಯಲ್ಲಿ ಹೆಚ್ಚುತ್ತಿರುವ ಸಂಸಾರ ಕಲಹ, “ಅಮೂಲ್ಯ ಲಿಯೋನ್ ಆದ ಕಥೆ”, “ನೀನೊಬ್ಬ “, “ನೀನೊಬ್ಬ ಆಫರ್ ಆಲ್ ಡ್ರೈವರ್”, “ಅಮ್ಮಾ ನಾ ಸೇಲಾದೆ ಆಡಂಬರ ಪಾಲಾದೆ”, “ಹೆಣದ ಜೊತೆ ಒಂದು ಸೆಲ್ಪಿ”, “ಸಭ್ಯರಿಗಿಲ್ಲ ಸಭ್ಯರಿಗಿಲ್ಲ ಸೆಕ್ಯೂರಿಟಿ ದಂಧೆಯೇ ಇಲ್ಲಿಯ ಮೂಲ ಮಂತ್ರ”, “ಗಂಡ ಜಗಳ ವರಸಿದ ಈ ತನುಡುಗರೇ ಇಲ್ಲದ ಹಠಮಾರಿ ಹೆಣ್ಣು”, “ಪತ್ರಕರ್ತರ ಕಷ್ಟ ಕೇಳೋರು ಯಾರು”, “ಮನುಷ್ಯನ ಸಂಬಂಧಗಂಡ ಹೆಂಡಿರ ಬೆಂಡೆತ್ತಿ ಬ್ರೇಕು ಹಾಕಿದ ಮೊಬೈಲ್”, “ಹುಡುಗರೇ ಹುಷಾರ್ ಹನಿ ಆಸೆಗೆ ಬಿದ್ದರೆ ಆಗುತ್ತಿರ ಟ್ರ್ಯಾಪ್”, “ಹೆಣ್ಣೆಂಬ ದೇವತೆ ಒಲಿದರೆ ನಾರಿ ಮುನಿದರೆ…??” ಹೀಗೆ ಹಲ ಹಲವಾರು ಲೇಖನಗಳನ್ನು ಬರೆದು ನಾಡನ್ನು ತಿದ್ದುವಂಥಹ ಕೆಲಸ ಮತ್ತು ನಾಡಿನ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸುವ ಕೆಲಸ ಕೆಲಸವನ್ನು ಮಾಡುತ್ತಿರುವ ಶೆಟ್ಟಿ ಬೈಂದೂರಿನ ಸುಗುಣ ಎಂಬ ಸಂಪನ್ನೆಯನ್ನು ಮದುವೆಯಾಗಿ ಶ್ರೀತಾ ಆರ್ ಶೆಟ್ಟಿ, ಶ್ರೀಯಾ ಆರ್ ಶೆಟ್ಟಿ ಎಂಬ ಎರಡು ಹೆಣ್ಣುಮಕ್ಕಳ ಮಕ್ಕಳ ತಂದೆಯಾಗಿ ಅತಿ ಕಿರಿಯ ವಯಸ್ಸಿನಲ್ಲಿ ಎಳನೇ ತರಗತಿ ಸಾಮಾಜಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ
ರಾಜಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರವಿ ಶೆಟ್ಟಿ ಓದಿರುವುದು ಬರೀ ಏಳತ ಬಂದೆ ಓದಲು ಮಾತ್ರ ಅದು ಸರ್ಕಾರಿ ಶಾಲೆಯಲ್ಲಿ. ಪ್ರತಿದಿನ 5 ಕಿಲೋಮೀಟರುಗಳಷ್ಟು ದೂರದಿಂದ ಶಾಲೆಗೆ ನಡೆದುಕೊಂಡು ಬರಬೇಕಾದ ರವಿ ಶೆಟ್ಟಿ ಮುಂ ಬಡತನ ಬಿಡಲಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲಿ ಕೃಷಿ ಅವಲಂಬಿತರಾಗಿ ಪ್ರತಿಯೊಂದು ಕೆಲಸದಲ್ಲೂ ಮುಂಚೂಣಿಯಲ್ಲಿದ್ದ ರವಿ ಶೆಟ್ಟಿ, ಕಾನೂನಿನ ಪುಸ್ತ ಪುಸ್ತಕದಲ್ಲಿರುವ ಯಾವುದೇ ಕಾಯ್ದೆಗಳನ್ನು ಆದರೂ ನಿದ್ದೆಗಣ್ಣಿನಲ್ಲಿ ಕೂಡ ಹೇಳುವ ಇವರು ಯಾವ ವಕೀಲರಿಗೂ ಕಡಿಮೆ ಇಲ್ಲ. ಕರ್ನಾಟಕದ 22 ರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪರಿಚಯವನ್ನು ಉಳಿಸಿಕೊಂಡ ರವಿ ಶೆಟ್ಟಿ ಪರಾಜಿತ “ಎಂ.ಎಲ್.ಎ.” ಅಭ್ಯರ್ಥಿ ಕೂಡ ಹೌದು. ಇವರ ಸಾಧನೆ ಬಹಳಷ್ಟು ಉಳಿಸಲು ದೊಡ್ಡ ಮಟ್ಟದ ಜೀರೋ ಟ್ರಾಫಿಕ್ ಮಾಡಿ ಪ್ರಖ್ಯಾತಿ ಹೊಂದಿದ ರವಿ ಶೆಟ್ಟಿ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಆಕ್ರಮಗಳ ವಿರುದ್ಧ ಯುದ್ಧವನ್ನು ಸಾರಿದ ಯುವ ಹೋರಾಟಗಾರ, ಪರಿಸರ ರಕ್ಷಣೆ ಸಲುವಾಗಿ ಅಕ್ರಮ ಕಲ್ಲು ಕೋರಿಗಳ ವಿರುದ್ಧ ಕಾನೂನು ಸಮರ ನಡೆಸಿ ದೊಡ್ಡಮಟ್ಟದ ದಂಡವನ್ನು ವಿಧಿಸಿದ ಕೀರ್ತಿ ರವಿ ಶೆಟ್ಟಿಯವರಿಗೆ ಸಲ್ಲುತ್ತದೆ. ಇಂದಿರಾ ಕ್ಯಾಂಟೀನ್ ಹಗರಣ, ಬಿಡಿಎ ಹಗರಣ, ಕಳಪೆ ಕಾಮಗಾರಿ ಹಗರಣ, ಬಿಬಿಎಂಪಿ ಕಳಪೆ ಕಾಮಗಾರಿ ಹಗರಣ, ಶಿಕ್ಷಣ ಕ್ಷೇತ್ರದ ಹಗರಣ ಮತ್ತು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ದೊಡ್ಡ ದೊಡ್ಡ ಮಟ್ಟದ ಹಗರಣಗಳನ್ನು ಯಾವುದೇ ಭಯಭೀತಿಯಿಲ್ಲದೇ ಬಯಲಿಗೆಳೆದು ಅಕ್ರಮಗಳಿಂದ ಆಕ್ರಮಣ ಮಾಡಿಸಿಕೊಂಡು ಹಲ್ಲೆಗೆ ಒಳಗಾಗುವಂತ ಪರಿಸ್ಥಿತಿ ಕೂಡ ಎದುರಿಸಿದ್ದಾರೆ ಶೆಟ್ಟಿ ಅಂಡರ್ ವರ್ಲ್ಡ್ ಡಾನ್‌ನಿಂದ ಹಿಡಿದು ಪುಡಿರೌಡಿಗಳ ಬೆದರಿಕೆಯಿಂದ ಬಳಲಿದ್ದರೂ ಯಾವುದಕ್ಕೂ ತಲೆಬಾಗದೆ ಹಿಡಿದ ಕೆಲಸವನ್ನು ಪೂರ್ಣಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಸಾವಿರಾರು ಜನಪಯೋಗಿ ಕೆಲಸವನ್ನು ಮಾಡಿದ ಶೆಟ್ಟಿ ಪ್ರತಿ ವರ್ಷ ಬಡವರಿಗೆ ಮನೆ ಕಟ್ಟಿಕೊಡುವುದು, ಬದುಕಲು ಬಡವರಿಗೆ ಚಿಕ್ಕಪುಟ್ಟ ವ್ಯವಹಾರಗಳನ್ನು ಮಾಡಿಕೊಡುವುದು, ಹೈನುಗಾರಿಕೆಗೆ ಒತ್ತು ನೀಡಲು ದಾನಿಗಳ ಸಹಾಯದಿಂದ ಆಕಳುಗಳನ್ನು ಕೊಡಿಸುವುದು ಹೀಗೆ ಹೇಳುತ್ತ ಹೋದರೆ ಒಂದೆರಡು ಅಲ್ಲ. ನಾಡು, ನುಡಿ, ಜಲ, ಭಾಷೆ, ಕಾರ್ಮಿಕರಿಗಾಗಿ ಪ್ರಾಣವನ್ನು ತ್ಯಾಗ ಮಾಡಲು ಹಿಂಜರಿಯದ ಹುಟ್ಟು ಹೋರಾಟಗಾರ ರವಿ ಶೆಟ್ಟಿ ಸುಮಾರು 18 ವರ್ಷಗಳಿಂದ ಕರ್ನಾಟಕದ ಕನ್ನಡ ಸೇವೆ, ಕಾರ್ಮಿಕರ ಸೇವೆ ಮಾಡಿಕೊಂಡು ಬಂದ ಇವರು “ಯುವ ರಾಷ್ಟ್ರದ ಕನಸುಗಾರ”, “ಕಾರ್ಮಿಕ ಬಂದು”, “ಕಾರ್ಮಿಕ ಮಿತ್ರ” ಮತ್ತು “ಮಾನವತಾ ಶ್ರೇಷ್ಠ ಪ್ರಶಸ್ತಿ” ಲೇಖಕರಾಗಿ “ಗೌರವ ಡಾಕ್ಟರೇಟ್”, “ಸೇವಾ ಶ್ರೇಷ್ಠ” “ಸೇವಾರತ್ನ”, “ಶ್ರೇಷ್ಠ ಕನ್ನಡಿಗ”, “ಕರಾವಳಿ ಕನ್ನಡಿಗ” ಹೀಗೆ రుద్దు ఒందు మగువన ಹತ್ತುಹಲವು ಬಿರುದುಗಳನ್ನು ಪಡೆದು “ಸರಣಿ ಬಿರುದುಗಳ ಸರದಾರ” ಎಂದು ನಾಡಿನಾದ್ಯಂತ ಪ್ರಖ್ಯಾತಿ ಹೊಂದಿರುವ ಡಾ.ರವಿ ಶೆಟ್ಟ ಬೈಂದೂರು ರವರ ಕನಸು “ಯುವ ರಾಷ್ಟ್ರ ಸ್ಥಾಪ ಸ್ಥಾಪನೆ”, ಭ್ರಷ್ಟಾಚಾರ, ಕಾನೂನು ವಿರೋಧಿ ಚಟುವಟಿಕೆಗಳನ್ನು ವಿರೋಧಿಸುವ ಇವರು ಯುವಜನತೆ ರಾಜಕೀಯಕ್ಕೆ ಬಂದು ರಾಜಕೀಯ ಶುದ್ದೀಕರಣ ಮಾಡಬೇಕೆಂದು ಕರೆ ನೀಡಿದ ವ್ಯಕ್ತಿ. ಕರ್ನಾಟಕ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ತನ್ನ ಸಂಸ್ಥೆಯ ಪದಾಧಿಕಾರಿಗಳನ್ನು ಒಂದೊಂದು ಜಿಲ್ಲೆಯಲ್ಲಿ ಕನಿಷ್ಠ ಎರಡರಿಂದ ಮೂರು ಲಕ್ಷ ಜನರನ್ನು ತನ್ನ ಸಂಸ್ಥೆಯಲ್ಲಿ ಹೊಂದಬೇಕೆನ್ನುವ ಮಹತ್ವಾಕಾಂಕ್ಷೆ ಇರುವ ಇವರು ಈಗಾಗಲೇ ಲಕ್ಷಾಂತರ ಜನ ಕಾರ್ಯಕರ್ತರನ್ನು ಒಗ್ಗೂಡಿಸಿ ನಾಡಿನ ಸೇವೆ ಮಾಡುತ್ತಿದ್ದಾರೆ, ಅಲ್ಲದೆ ನಾಡಿನ ಹಳ್ಳಿಹಳ್ಳಿಗೂ ನನ್ನ ಸಂಸ್ಥೆಯನ್ನು ಕೊಂಡೊಯ್ಯುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.. ರಾಜ್ಯದ ಸಾಮಾನ್ಯ ಕಾರ್ಮಿಕರಿಂದ ಹಿಡಿದು, ಮಠಾಧೀಶರು, ರಾಜಕಾರಣಿಗಳು, ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದಿದ ರವಿ ಶೆಟ್ಟಿ ಸ್ನೇಹಜೀವಿ, ಸ್ವಾರ್ಥವಿಲ್ಲದೆ, ಭೇದಭಾವವಿಲ್ಲದೆ ಎಲ್ಲರೂ ನಮ್ಮವರು ನಾವೆಲ್ಲಾ ಒಂದೇ ಎಂಬ ಮನಸ್ಥಿತಿಯ ಶೆಟ್ಟಿ ನಾಡಿನ ಆಸ್ಥಿತೆ ಕಾಪಾಡುವ ಸೈನಿಕ ಎಂದರೆ ತಪ್ಪಾಗಲಾರದು…

ಕನ್ನಡತಿ

ಪೂಜಾ ಶೆಟ್ಟಿ

ರಾಜ್ಯಾಧ್ಯಕ್ಷರು , ಮಹಿಳಾ ವಿಭಾಗ
ಪೂಜಾ ಶೆಟ್ಟಿ ಇವರು ಹಳ್ಳಿಯಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡು ಅತಿ ಕಿರಿಯ ವಯಸ್ಸಿನಲ್ಲಿ ಸುಮಾರು 500ಕ್ಕೂ ಹೆಚ್ಚು ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಹಿಳಾ ಸೌಲಭ್ಯ, ಸರ್ಕಾರದ ಸವಲತ್ತುಗಳನ್ನು ಮಹಿಳೆಯರಿಗೆ ಕೊಡಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟು ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುವುದು, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಮಾಹಿತಿ ಶಿಬಿರ, ಪೊಲೀಸ್ ಇಲಾಖೆಯೊಂದಿಗೆ ಸೇರಿ ಕಾನೂನು ಶಿಬಿರ ಮತ್ತು ನೊಂದ ಹೆಣ್ಣು ಮಕ್ಕಳ ನೆರವಿಗೆ ಧಾವಿಸಿ ಕಿರಿಯ ವಯಸ್ಸಿನಲ್ಲೇ ಬಹಳಷ್ಟು ಪ್ರಶಸ್ತಿ ಪುರಸ್ಕಾರವನ್ನು ಪಡೆದ “ವೀರಮಹಿಳೆ”. ಪೂಜಾ ಶೆಟ್ಟಿ ಇವರು ಹುಟ್ಟು ಹೋರಾಟಗಾರರು. ರೈತ ಚಳುವಳಿ, ದಲಿತ ಚಳುವಳಿಯಲ್ಲಿ ಹಲವಾರು ಬಾರಿ ಪೊಲೀಸ್ ಬಂಧನಕ್ಕೊಳಗಾಗಿರುವ ಪೂಜಾ ಶೆಟ್ಟಿ ಅವರು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಮಹಿಳಾ ರಾಜ್ಯಾಧ್ಯಕ್ಷರಾಗಿ ನಾಡಿನಾದ್ಯಂತ ಕಾರ್ಮಿಕರ ಸೇವೆ ಮಾಡುತ್ತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ.

ನಮ್ಮ ಹೋರಾಟದ ಶಕ್ತಿಗಳು

ಪ್ರಶಸ್ತಿಗಳು